ಕೊಳ್ಳೇಗಾಲ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ನೂತನವಾಗಿ ತಾಲ್ಲೂಕು ದಲಿತ ಹೋರಾಟ ರೈತ ಸಂಘವನ್ನು ಸ್ಥಾಪನೆ ಮಾಡಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ತಾಲ್ಲೂಕು ದಲಿತ ಹೋರಾಟ ರೈತ ಸಂಘದ ಅಧ್ಯಕ್ಷರಾಗಿ ಮಲ್ಲರಾಜು, ಕಾರ್ಯದರ್ಶಿಯಾಗಿ ಮುರುಳೀಧರನ್, ಗೌರವಧ್ಯಕ್ಷ ಮುದ್ದುರಾಜು, ಉಪಾಧ್ಯಕ್ಷರು ಅಣ್ಣಗಳ್ಳಿ ಆನಂದ್,ಮುತ್ತುರಾಜ್, ಖಜಾಂಚಿ ಮಹದೇವ, ಸಹ ಕಾರ್ಯದರ್ಶಿ ಶಿವಣ್ಣ, ಸಂಘಟನಾ ಕಾರ್ಯದರ್ಶಿ ಮೋಹನ್ ಪದಾಧಿಕಾರಿಗಳು ನೇಮಕ ಮಾಡಿದರು.
ಹಿರಿಯ ರೈತ ಮುಖಂಡರು ಅಣಗಳ್ಳಿ ಬಸವರಾಜು ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ದಲಿತ ರೈತ ಸಂಘಟನೆ ಮಾಡಲಾಗಿದೆ. ಈಗಾಗಲೇ ಸಂಘದಲ್ಲಿ ನೂರಕ್ಕೂ ಹೆಚ್ಚು ಮಂದಿ ರೈತರನ್ನು ಇದ್ದಾರೆ. ಜೊತೆಗೆ ಜಿಲ್ಲಾ ಮಟ್ಟ ಹಾಗೂ ಎಲ್ಲಾ ತಾಲ್ಲೂಕಿನಲ್ಲಿ ದಲಿತ ರೈತ ಸಂಘಟನೆ ಮಾಡುವ ಅಭಿಲಾಷೆ ಹೊಂದಿದ್ದೇವೆ ಎಂದರು.
ನಮ್ಮ ಜನಾಂಗದವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳು ನಡೆದಲ್ಲಿ ಇದರ ಬಗ್ಗೆ ಹೋರಾಟ ನಡೆಸಿ ನ್ಯಾಯ ಕೊಡಿಸುವ ಮೂಲಕ ಸಂಘಟನೆ ಬಲಗೊಳಿಸಬೇಕು. ಸದಸ್ಯತ್ವ ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಚಂದಕವಾಡಿ ಹೋಬಳಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ಅಧ್ಯಕ್ಷ ಸೋಮಣ್ಣ, ನಿರ್ದೇಶಕರು ಗುರುಸ್ವಾಮಿ, ಡಾ.ಶಿವಕುಮಾರ್, ಶಿವಬಸವಣ್ಣ, ಮಾದು ಹಾಗೂ ಸಿದ್ದಯ್ಯನಪುರ ಕೆಂಪರಾಜು, ದಾಸನಪುರ ಶಿವಕುಮಾರ್, ಅಣ್ಣಪ್ಪಸ್ವಾಮಿ, ಸೋಮಣ್ಣ, ಮುಡಿಗುಂಡ ಚಾಮುಂಡಿ, ಕಾಮಗೆರೆ ಶಿವಕುಮಾರ್, ಕೆಂಪನಪಾಳ್ಯ ಶಿವಣ್ಣ, ಭೀಮನಗರ ಬಸವರಾಜು ಹಾಗೂ ಇನ್ನೀತರರು ಇದ್ದರು.
ವರದಿ : ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.