ಕೊಳ್ಳೇಗಾಲ. ತಾಲ್ಲೂಕಿನ ಮಧುವನಹಳ್ಳಿ ಬೈಪಾಸ್ ಸರ್ಕಲ್ ಶ್ರೀ ರಾಜ ಋಷಿ ಭಗೀರಥ ಮಹರ್ಷಿ ಸರ್ಕಲ್ ಎಂಬ ನಾಮಫಲಕವನ್ನು ಹೊಸದುರ್ಗ ಭಗೀರಥ ಪೀಠ ಶ್ರೀ.ಪುರುಷೋತ್ತಮ್ ಸ್ವಾಮಿಗಳು ಅವರು ಉದ್ಘಾಟನೆ ಮಾಡಿದರು.
ಬಳಿಕ ಗ್ರಾಮದಲ್ಲಿನ ಉದ್ಬವಮೂರ್ತಿ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ 15 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮಹದೇಶ್ವರ ಸತ್ತಿಗೆ, ಕಬ್ಬಾಳಮ್ಮ, ಸತ್ತಿಗೆ, ರಾಕಸಮ್ಮನ ಸತ್ತಿಗೆ ಹಾಗೂ ಜನಾಂಗದ ಸ್ವಾಮಿಗಳನ್ನು ಬೆಳ್ಳಿ ಪಲ್ಲಕಿಯ ಉತ್ಸವ ನಡೆಯಿತು. ನಂತರ ಆಗಮಿಸಿದ್ದ ಜನರಿಗೆ ಅನ್ನಸಂತರ್ಪಣೆ ಮಾಡಿದರು.
ಸರಗೂರು ಅಯ್ಯನ್ ಮಠದ ಮಹದೇವಸ್ವಾಮಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಉಪ್ಪಾರ ನಿಗಮ ಅಧ್ಯಕ್ಷರು ಲಕ್ಷ್ಮಣ್ ಭರಣ್ಣಯ್ಯ, ಮಾಜಿ ಅಧ್ಯಕ್ಷ ಶಿವಕುಮಾರ್, ಹನೂರು ಕ್ಷೇತ್ರ ಬಿಜೆಪಿ ಮುಖಂಡ ನಿಶಾಂತ್, ಗೌರಿ ಬಿದನೂರು ಜಿಲ್ಲೆಯ ಉಪ್ಪಾರ ಉದ್ಯಮಿ ನಾಗರಾಜು, ಗ್ರಾಮದ ಗಡಿಯಜಮಾನರು ಚಿಕ್ಕತಾಂಡಶೆಟ್ಟಿ, ದೊಡ್ಡ ಯಜಮಾನರು ಸಿದ್ದರಾಜು, 12 ಪಂಗಡದ ಯಜಮಾನರು ಹಾಗೂ ಇತರರು ಇದ್ದರು.
ವರದಿ : ನಿಂಪು ಬ್ರದರ್ಸ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.